ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪರವಾನಿಗೆ ಸಂಬಂಧ 5000 ಲಂಚಕ್ಕೆ ಬೇಡಿಕೆಯಿಟ್ಟ ಭ್ರಷ್ಟ ಆರ್ ಟಿ ಓ ಅಧಿಕಾರಿಗಳಿಗಳನ್ನು ಬಂಧಿಸಿರುವ ಘಟನೆ ಇಲ್ಲಿನ ಪ್ರದೇಶಿಕ ಸಾರಿಗೆ ಇಲಾಖೆಯಲ್ಲಿ ನಡೆದಿದೆ. ಆರ್ ಟಿ ಓ ಮಧುರಾ, ಸಿಬ್ಬಂದಿ ಲತಾ ಬಂಧಿತರು.
ಪ್ರಕರಣದ ಹಿನ್ನಲೆ ಏನು?

ಪ್ರಕಾಶ್ ಎಂಬುವವರು ನೀಡಿದ ದೂರಿನ ಅನ್ವಯ, ದೂರುದಾರರು ಖಾಸಗಿ ಇನ್ಶುರೆನ್ಸ್ ಏಜೆಂಟ್ ಹಾಗೂ ರೆಂಟೆಡ್ ಬೈಕ್ ವೃತ್ತಿ ಮಾಡಿಕೊಂಡಿದ್ದರು. ಒಟ್ಟು 8 ದ್ವಿಕಚ್ರ ವಾಹನಗಳಿಗೆ ಬಾಡಿಗೆ ಆಧಾರದ ಮೇಲೆ ಕರ್ನಾಟಕಾದ್ಯಂತ ಸಂಚರಿಸಲು ಪರವಾನಿಗೆ ನೀಡುವಂತೆ, ಒಂದು ಬೈಕ್ ಗೆ ತಲಾ 500 ರಂತೆ (ಫೀ.) ಒಟ್ಟು 8 ಬೈಕ್ ಗೆ 4000 ದಂತೆ ದಿ. 21-03-2023 ಚಿಕ್ಕಮಗಳೂರು ಆರ್ ಟಿ ಓ ಕಛೇರಿಗೆ ಅರ್ಜಿ ಹಾಕಿದ್ದರು ಆದರೆ ಅವುಗಳು ರಿಜೆಕ್ಟ್ ಆಗಿದ್ದವು.

ಇದಾದ ಬಳಿಕ ಪ್ರಕಾಶ್ ಆರ್ ಟಿ ಓ ಕಛೇರಿಗೆ ಭೇಟಿ ನೀಡಿದ್ದು ಅಲ್ಲಿನ ಸಿಬ್ಬಂದಿ ಲತಾ ಅವರ ಬಳಿ ರಿಜೆಕ್ಟ್ ಆದ ಕುರಿತು ಮಾಹಿತಿ ಕೇಳಿದ್ದು ಅವರು ಆರ್ ಟಿ ಓ ಮೇಡಂ ನ ಕೇಳಿ ಹೇಳ್ತೀನಿ ಎಂದಿದ್ದಾರೆ ಆ ಬಳಿಕ ಆರ್ ಟಿ ಓ ಅಧಿಕಾರಿ ಮಧುರಾ ಅವರ ಬಳಿ ಕೇಳಿದ್ದು, ಒಂದು ವಾಹನಕ್ಕೆ ಸಾವಿರದಂತೆ ನೀಡಬೇಕು ಎಂದು ಹೇಳಿದ್ದಾರೆ. ಪ್ರಕಾಶ್ ಮೊದಲಿಗೆ ಒಂದು ವಾಹನಕ್ಕೆ ಒಂದು ಸಾವಿರ ನೀಡಿದ್ದು ಅದನ್ನು ತಮ್ಮ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ಬಳಿಕ ಮತ್ತೊಂದು ವಾಹಕ್ಕೆ ಒಂದು ಸಾವಿರ ಹಣ ನೀಡಿದ್ದಾರೆ. ಒಟ್ಟು 2 ಬೈಕ್ ಗಳ ಪರವಾನಿಗೆಯನ್ನು ಪ್ರಕಾಶ್ ಪಡೆದಿದ್ದು, ಇನ್ನುಳಿದ ಅರ್ಜಿಗಳು ರಿಜೆಕ್ಟ್ ಆಗಿವೆ. ಪರವಾನಿಗೆ ಮಾಡಿಕೊಡಲು ಬೈಕಿಗೆ ಒಂದು ಸಾವಿರದಂತೆ ಲಂಚಕ್ಕೆ ಬೇಡಿಕೆಯಿಟ್ಟ ಭ್ರಷ್ಟ ಆರ್ ಟಿ ಓ ಅಧಿಕಾರಿ ವಿರುದ್ಧ ಪ್ರಕಾಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜನ್ ಹಾಗೂ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ಮಾಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ಅಟೆಂಡರ್ ಮೂಲಕವೇ ನಡೀತಿತ್ತಾ ಡೀಲ್?
ಕಳೆದ ಕೆಲವು ತಿಂಗಳಿನಿಂದ ಈ ಭ್ರಷ್ಟ ಆರ್ ಟಿ ಓ ಅಧಿಕಾರಿ ಮಧುರಾ ಹಲವು ಜನರಿಗೆ ಆರ್ ಸಿ ಟ್ರಾನ್ಸ್ ಫರ್ ಸೇರಿದಂತೆ ಆರ್ ಟಿ ಓ ಕಛೇರಿಯ ಹಲವಾರು ಕೆಲಸಗಳಿಗೆ ತನ್ನದೇ ಹತ್ತಾರು ನಿಯಮ ಹೇಳಿ ಸತಾಯಿಸುತ್ತದ್ದಳಂತೆ. ಮಾಹಿತಿ ಪ್ರಕಾರ ಅಟೆಂಡರ್ ಗಳ ಮೂಲಕವೇ ಇಂತ ಡೀಲ್ ಗಳನ್ನು ಈಕೆ ಮಾಡ್ತಿದ್ಲು ಎಂಬ ಆರೋಪಗಳು ಸಹ ಕೇಳಿಬಂದಿವೆ.













