
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ, ಕಲ್ಕಟ್ಟೆ ಇವರ ಆಶ್ರಯದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಏಪ್ರಿಲ್ 25, 2026ರಂದು ಕಲ್ಕಟ್ಟೆಯಲ್ಲಿ ಆಯೋಜಿಸಲಾಗಿದೆ.
ಈ ಬಾರಿ ಪಂದ್ಯಾಟವು ಪ್ರೋ ಲೀಗ್ ಮಾದರಿಯಲ್ಲಿ ನಡೆಯಲಿದ್ದು, 10 ಮಾಲೀಕರನ್ನೊಳಗೊಂಡ 10 ತಂಡಗಳು ಪಾಲ್ಗೊಳ್ಳಲಿವೆ. ಶೃಂಗೇರಿ ಕ್ಷೇತ್ರದ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಪಂದ್ಯಾಟದ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳೊಂದಿಗೆ ಟ್ರೋಫಿ ನೀಡಲಾಗುತ್ತದೆ. ಪ್ರಥಮ ಸ್ಥಾನಕ್ಕೆ ₹30,000, ದ್ವಿತೀಯ ಸ್ಥಾನಕ್ಕೆ ₹20,000, ತೃತೀಯ ಸ್ಥಾನಕ್ಕೆ ₹10,000 ಹಾಗೂ ಚತುರ್ಥ ಸ್ಥಾನಕ್ಕೆ ₹5,000 ಬಹುಮಾನ ಘೋಷಿಸಲಾಗಿದೆ.

ಪಂದ್ಯಾಟದ ನೇರಪ್ರಸಾರ ‘ನ್ಯೂಸ್ ಮಲ್ನಾಡ್’ ಚಾನಲ್ನಲ್ಲಿ ಲೈವ್ ಪ್ರಸಾರವಾಗಲಿದೆ. ಕಬಡ್ಡಿ ಅಭಿಮಾನಿಗಳಿಗೆ ಈ ಪಂದ್ಯಾಟ ಕ್ರೀಡಾ ಹಬ್ಬದಂತಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.













