
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿದಿಬ್ಬದ ಬಳಿಯ ಭದ್ರಾ ಹಿನ್ನೀರಿನಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ಪುಟ್ಟಪ್ಪ ಕ್ಯಾಂಪ್ ಒಡ್ಡಿನಕೊಪ್ಪದ ನಿವಾಸಿ ಮಧುಸೂದನ್ (44) ಮೃತಪಟ್ಟವರು.
ಮಧುಸೂದನ್, ಅವರ ಸಹೋದರಿ ಮಮತಾ ಮತ್ತು ಕುಟುಂಬದವರು ಭಾನುವಾರ ಮಾರಿದಿಬ್ಬದ ಬಳಿಯಿರುವ ಭದ್ರಾಹಿನ್ನೀರು ನೋಡಲು ಬಂದಿದ್ದರು. ಮಧ್ಯಾಹ್ನ ಮಧುಸೂದನ್ ಅವರು ಭದ್ರಾಹಿನ್ನೀರಿನಲ್ಲಿ ಈಜಲು ಹೋಗಿದ್ದು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿದೆ.

ಮೃತರ ಸಹೋದರಿ ಮಮತಾ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.














