
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರಟ ಪಾದಯಾತ್ರೆಗಳಿಗೆ ಬೆಂಗಳೂರಿನ ಸಮಾಜ ಸೇವಕರು, ಅನ್ನ ದಾನಿಗಳಾದ ರೇವಣ್ಣ ಮತ್ತು ಸಂಗಡಿಗರು ಅನ್ನದಾನ ಮಾಡಿದರು.
ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ

ನಾಲಕ್ಕೂ ದಿನಗಳಿಂದ ರಾಜ್ಯದ ನಾನಾ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಬರುತ್ತಿರುವ ಪಾದಯಾತ್ರಿಗಳಿಗೆ ಬೆಳೆಗ್ಗಿನ ಉಪಹಾರ ಸೇರಿದಂತೆ ಕಲ್ಲಂಗಡಿ ಹಣ್ಣುಗಳು, ಮಜ್ಜಿಗೆ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟವನ್ನು ಕೊಟ್ಟಿಗೆಹಾರದ ಟಿ. ಎ. ಅಬ್ದುಲ್ ಖಾದರ್ ಹಾಜಿ ಕೊಟ್ಟಿಗೆಹಾರ ಪಟ್ಟಣದಲ್ಲಿರುವ ಇವರ ಸ್ಥಳದಲ್ಲಿ ಪಾದಯಾತ್ರಿಗಳಿಗೆ ಬೆಂಗಳೂರು ರೇವಣ್ಣ ಮತ್ತು ಸಂಗಡಿಗರು ಅನ್ನದಾನ ಮಾಡಿದರು.

13 ವರ್ಷಗಳಿಂದ ಅನ್ನದಾನ:
ಸಾವಿರಾರು ಭಕ್ತ ಪಾದಯಾತ್ರಿಗಳಿಗೆ ಬೆಂಗಳೂರು ರೇವಣ್ಣ ಮತ್ತು ಸಂಗಡಿಗರು ಕಳೆದ 13 ವರ್ಷಗಳಿಂದ ಅನ್ನದಾನ ಹಾಗೂ ತಂಪು ಪಾನಿಯ ನೀಡುತ್ತ ಬಂದಿದ್ದಾರೆ.

ಇದನ್ನೂ ಓದಿ: ಜಮೀನು ಸರ್ವೆಯಲ್ಲಿ ಬದಲಾವಣೆ;ಇನ್ಮುಂದೆ 10 ನಿಮಿಷದಲ್ಲಿ ಮುಗಿಯಲಿದೆ ಲ್ಯಾಂಡ್ ಸರ್ವೆ; ಈ ಕುರಿತು ಕಂದಾಯ ಸಚಿವ ಹೇಳಿದ್ದೇನು?
ಇನ್ನು ಈ ಸಂದರ್ಭದಲ್ಲಿ ಅನ್ನದಾನಿಗಳಾದ ಬೆಂಗಳೂರು ರೇವಣ್ಣ ಮತ್ತು ಸಂಗಡಿಗರು, ಸಮಾಜ ಸೇವಕ ವೇಣುಗೋಪಾಲ್, ಕನ್ನಡಸೇನೆ ಜಿಲ್ಲಾ ರಾಜ್ಯ ಉಪಾಧ್ಯಕ್ಷರು ರಾಜು ಬಾಯ್, ಧರ್ಮಸ್ಥಳ ಹಕೀಮ್, ನಿಖಿಲ್, ತನು ಕೊಟ್ಟಿಗೆಹಾರ, ದೇವನ ಗುಲ್ ಸಂದೀಪ್, ಸಂಜಯ್ ಗೌಡ, ವಿಕ್ರಂ ಬಿದ್ರುತಳ, ಚಂದ್ರಶೇಖರ್ ಮುಂತಾದವರು ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ














