ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿಯ 9 ಮಂಡಲಗಳ ಅಧ್ಯಕ್ಷರುಗಳು ಹಾಗೂ ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

9 ಮಂಡಲಗಳ ಅಧ್ಯಕ್ಷರುಗಳ ಪಟ್ಟಿ:
* ಚಿಕ್ಕಮಗಳೂರು ನಗರ – ಕೆ.ಎಸ್. ಪುಷ್ಪರಾಜು
* ಚಿಕ್ಕಮಗಳೂರು ಗ್ರಾಮಾಂತರ- ವಿಜಯಕುಮಾರ್ ಗುಣಸಾಗರ
* ಕಡೂರು- ಬಿ.ಪಿ.ದೇವಾನಂದ್
* ತರೀಕೆರೆ- ಪ್ರತಾಪ್ ಗರಗದಹಳ್ಳಿ
* ಮೂಡಿಗೆರೆ- ಗಜೇಂದ್ರ ಕೊಟ್ಟಿಗೆಹಾರ
* ಆಲ್ದೂರು- ರವಿ ಬಸವರಹಳ್ಳಿ
* ಕೊಪ್ಪ – ದಿನೇಶ್ ಹೊಸೂರು
* ಎನ್.ಆರ್. ಪುರ- ಅರುಣ್ ಕುಮಾರ್
* ಶೃಂಗೇರಿ- ಉಮೇಶ್ ಭಟ್


ಇದನ್ನೂ ಓದಿ; ಹುಕ್ಕಾ ಪ್ರಿಯರಿಗೆ ಬಿಗ್ ಶಾಕ್; ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧ! ಕಾರಣವೇನು?
ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ಪಟ್ಟಿ:
* ಯುವಮೋರ್ಚಾ – ಸಂತೋಷ್ ಕೋಟ್ಯಾನ್
* ಎಸ್.ಸಿ.ಮೋರ್ಚಾ – ಕೆ.ಪಿ.ವೆಂಕಟೇಶ್
* ಮಹಿಳಾ ಮೋರ್ಚಾ – ಜಸಂತಾ ಅನಿಲ್ ಕುಮಾರ್
* ರೈತ ಮೋರ್ಚಾ- ಶಂಬೈನೂರು ಆನಂದಪ್ಪ
* ಒಬಿಸಿ ಮೋರ್ಚಾ- ಟಿ.ಆರ್.ಲಕ್ಕಪ್ಪ ಕಡೂರು
* ಎಸ್.ಟಿ.ಮೋರ್ಚಾ- ಜೆ. ಮೌನೇಶಪ್ಪ ಕಳಸ
* ಅಲ್ಪಸಂಖ್ಯಾತರ ಮೋರ್ಚಾ- ಅಬ್ದುಲ್ ಕಬೀರ್
ಭದ್ರಾ ನದಿ ತೀರದಲ್ಲಿ ವಾಮಾಚಾರ | ಐದಾರು ಕುರಿ-ಮೇಕೆಗಳ ಬಲಿ ಕೊಟ್ಟಿರುವ ಕಿಡಿಗೇಡಿಗಳು
ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಬಳಿ ಬೃಹತ್ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ, ಮೇಕೆಗಳನ್ನು ಬಲಿ ಕೊಡಲಾಗಿದೆ. ನದಿಯಲ್ಲಿ ರುಂಡ-ಮುಂಡ ಬೇರ್ಪಟ್ಟ ಕುರಿ-ಮೇಕೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಹೊರನಾಡಿಗೆ ಹೋಗುವ ಮುಖ್ಯರಸ್ತೆ ಬಳಿಯೇ ಈ ಕೃತ್ಯ ನಡೆದಿದ್ದು, ವಾಮಾಚಾರಕ್ಕೆ ಬಳಸಿದ್ದ ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ ನದಿ ದಡದಲ್ಲಿ ಪತ್ತೆಯಾಗಿವೆ ಹಾಗೂ ಭದ್ರಾ ನದಿಯಲ್ಲಿ 5-6 ಕುರಿ- ಮೇಕೆಗಳ ಶವ ಕೂಡಾ ಪತ್ತೆಯಾಗಿದೆ.
ರಾತ್ರಿ ವೇಳೆ ನಡೆದಿರುವ ವಾಮಾಚಾರದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ವಾಮಾಚಾರದ ರಹಸ್ಯ ಭೇದಿಸಲು ಪೊಲೀಸರು ಮುಂದಾಗಿದ್ದು, ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನದಿಯಿಂದ ಮೇಕೆ-ಕುರಿಗಳ ಶವ ಹೊರಕ್ಕೆ ತೆಗೆದಿದ್ದಾರೆ.















