ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಗ್ರಾಮಗಳಲ್ಲಿ ಗಾಂಜಾ ಸೇರಿದಂತೆ ಇತರೆ ಮಾದಕ ಪದಾರ್ಥಗಳ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹದಿಹರೆಯದ ಯುವಕರು ಮತ್ತಿನ ಮೋಹಕ್ಕೆ ಬಿದ್ದು ಬದುಕು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಹಿರೇಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೂವಿನಹಕ್ಲು ಸರ್ಕಲ್ ಬಳಿ 450 ಗ್ರಾಂ ಗಾಂಜಾ ಹೊಂದಿದ್ದ ಮೂವರನ್ನು ಬಾಳೆಹೊನ್ನೂರು ಪಿಎಸ್ಐ ದಿಲೀಪ್ ಕುಮಾರ್ ಮಿಂಚಿನ ಧಾಳಿ ನಡೆಸಿ ಬಂಧಿಸಿದ್ದಾರೆ.
ಇದನ್ನೂ ಓದಿ; ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ

ಆರೋಪಿಗಳಾದ ಪ್ರಕಾಶ್ ಪೀಟರ್ ಡಿಸೋಜ, ವಿಜಯ ಶೆಟ್ಟಿ ಹಾಗೂ ಅಲೆಸ್ಟರ್ ಜೋಸೆಫ್ ತಾವ್ರೋ ಎಂಬುವವರು ಜಾನ್ಸನ್ ಎಂಬುವವರಿಂದ ಹತ್ತು ಸಾವಿರ ರೂ ನೀಡಿ ಗಾಂಜಾ 450 ಗ್ರಾಂ ಗಾಂಜಾ ಖರೀದಿಸಿದ್ದರು. ವಿಷಯ ತಿಳಿದ ಬಾಳೆಹೊನ್ನೂರು ಪೊಲೀಸರು ಗಾಂಜಾ ಸಮೇತ ಮೂವರು ಆರೋಪಿಗಳನ್ನು ಹಾಗೂ ಎರಡು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ಗಾಂಜಾ ಮಾರಾಟಗಾರ ಜಾನ್ಸನ್ ಪರಾರಿಯಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಬೇಸತ್ತು ಸ್ವಯಂ ಬಾಳೆ ಗಿಡ ನಾಶ ಮಾಡಿದ ರೈತರು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಕಾಡಾನೆ ಹಿಂಡಿನಿಂದ ಬೇಸತ್ತ ರೈತರು, ಸ್ವತಃ ತಾವೇ ಬೆಳೆಯನ್ನು ನಾಶಪಡಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮ ಸಮೀಪದ ಹಕ್ಕಿಮಿಕ್ಕಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?
















