ಭೂ ಮಾಲೀಕತ್ವ ಹೊಂದಿರುವ ರೈತರ ಮೇಲೆ ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಿದ್ಧತೆ

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಸಾಗುವಳಿ ಭೂ ಮಾಲೀಕತ್ವ ಹೊಂದಿರುವ ರೈತರ ಮೇಲೆ ಅರಣ್ಯ ಒತ್ತುವರಿ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆ ಇದೀಗ ಸಿದ್ಧತೆ ನಡೆಸಿದೆ.

ಹೌದು, ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಮಂಜೂರಾತಿ ಪಡೆದು ಸಾಗುವಳಿ ಭೂ ಮಾಲೀಕತ್ವ ಹೊಂದಿರುವ ರೈತರ ಮೇಲೆ ಕರ್ನಾಟಕ ಅರಣ್ಯ ಕಾಯಿದೆ 1963 ರ ಅನ್ವಯ ಒತ್ತುವರಿ ಪ್ರಕರಣ ದಾಖಲಿಸುವುದಕ್ಕೆ ಕ್ರಮ ವಹಿಸಿರುವ ಅರಣ್ಯ ನಿಯಮ 64 ರಡಿ ರೈತರಿಗೆ ನೋಟಿಸ್‌ ಜಾರಿ ಮಾಡಲು ಮುಂದಾಗಿದೆ.


ನ್ನೂ ಓದಿ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗುಡ್ ನ್ಯೂಸ್; ಏನದು?


ಶತಮಾನಕ್ಕಿಂತ ಹಿಂದೆ ಭೂ ಹಕ್ಕು ಹೊಂದಿದ್ದರೂ ಒತ್ತುವರಿ ಪ್ರಕರಣ:
ಅರಣ್ಯ ಪ್ರದೇಶದಲ್ಲಿ ಶತಮಾನಕ್ಕಿಂತ ಹಿಂದೆ ಭೂ ಹಕ್ಕು ಹೊಂದಿದ್ದರೂ ಅಂತಹ ರೈತರ ಮೇಲೂ ಒತ್ತುವರಿ ಪ್ರಕರಣ ದಾಖಲಾಗಲಿದೆ. ಅಧಿಸೂಚಿತ ಅರಣ್ಯ ಪ್ರದೇಶವನ್ನು ರೈತರಿಂದ ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಬಿಗಿ ಕಾನೂನು ಕ್ರಮ ಕೈಗೊಳ್ಳುತ್ತಿದೆ.

ಮುಂಬರುವ ದಿನಗಳಲ್ಲಿ ಪಟ್ಟಣ, ನಗರ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಕಂದಾಯ ಇಲಾಖೆ ನೀಡಿರುವ ಉಚಿತ ನಿವೇಶನ ಹಕ್ಕುಪತ್ರ, ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಿರ್ಮಾಣ ಅಕ್ರಮ ಎಂದು ನಿರ್ಧರಿಸಿ ಒತ್ತುವರಿ ಪ್ರಕರಣ ದಾಖಲಿಸಲು ಚಿಂತಿಸಿದೆ.


ನ್ನೂ ಓದಿ: ಭದ್ರತಾ ಪಡೆಯಲ್ಲಿ ಜಾಬ್‌ ಆಫರ್; SSLC ವಿದ್ಯಾರ್ಹತೆ, 21,700 ಸಂಬಳ


ಜಿಲ್ಲೆಯಲ್ಲಿ 32,318 ಎಕರೆಗೂ ಹೆಚ್ಚು ಭೂ ಮಂಜೂರಾತಿ ರದ್ದು:
ಈಗಾಗಲೇ ರೈತರ ಹೆಸರಲ್ಲಿರುವ ಆರ್‌ಟಿಸಿ, ಮ್ಯುಟೇಷನ್‌ ರದ್ದು ಕೋರಿ ವಲಯಾರಣ್ಯಾಧಿಕಾರಿಗಳು ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಆಡಳಿತ ನ್ಯಾಯಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ನೋಟಿಸ್‌ ಜಾರಿ ಆಗಿದೆ. ಶಿವಮೊಗ್ಗ ಅರಣ್ಯ ಸಂರಕ್ಷಣಾ ವಿಭಾಗದ ವೃತ್ತ ವ್ಯಾಪ್ತಿ ಸುಮಾರು 32,318 ಎಕರೆಗೂ ಹೆಚ್ಚು ಅಧಿಸೂಚಿತ ಅರಣ್ಯ ಪ್ರದೇಶದಲ್ಲಿನ ಭೂ ಮಂಜೂರಾತಿ ರದ್ದುಗೊಳಿಸುವ ಸಂಬಂಧ ಅರಣ್ಯ ಇಲಾಖೆ, ರೈತರ ನಡುವೆ ಕಾನೂನು ಸಂಘರ್ಷ ಆರಂಭವಾಗಿದೆ.


ನ್ನೂ ಓದಿ: ತೊಗರಿ ಬೇಳೆ ಸೇವಿಸುವ ಮುನ್ನ ಹುಷಾರ್‌; ಬೇಳೆಯಲ್ಲೂ ಪತ್ತೆಯಾಗಿದೆ ಕ್ಯಾನ್ಸರ್‌ ಅಂಶ!; ಕೆಮಿಕಲ್ ತೊಗರಿ ಬೇಳೆ ಕಂಡು ಹಿಡಿಯೋದು ಹೇಗೆ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.