ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ನಾರ್ವೆ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ 11 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ; 18,000 ದಿಂದ 22,000 ಸಂಬಳ, 10th ವಿದ್ಯಾರ್ಹತೆ

ನಾರ್ವೆ ಸಹಕಾರ ಸಂಘದ ಇದರ ಆಡಳಿತ ಮಂಡಲಿಗೆ ಚುನಾವಣಾ ದಿನಾಂಕದಿಂದ ಮುಂದಿನ ಐದು ವರ್ಷಗಳ ಅವಧಿಗೆ 09-03-2025 ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಈ ಪ್ರಕ್ರಿಯೆಯಲ್ಲಿ ನಾಮ ಪತ್ರ ವಾಪಸ್ಸಾತಿ ಕಾರ್ಯದ ನಂತರ ಚುನಾವಣೆ ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳು ವಿರೋಧವಾಗಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಎನ್. ವಿ ಹರೀಶ್, ಪ್ರಸನ್ನ ಯು. ಜಿ, ಬಿ. ಸಿ ರಾಘವೇಂದ್ರ, ಕೆ. ಸಿ ವಿಜಯ್, ಅನಿಲ್ ಕುಮಾರ ಕೆ. ಎನ್, ಬಿ. ಪಿ ತಿಮ್ಮಪ್ಪ ಸಾಮಾನ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಲೇಬರ್ ಕಾರ್ಡ್ಗೆ ರೂ.60,000 ಸಹಾಯಧನ: ಸರ್ಕಾರದ ವಿಶೇಷ ಯೋಜನೆ
ಇನ್ನು ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಅಭ್ಯರ್ಥಿಯಾಗಿ ಅಬ್ದುಲ್ ರಶೀದ್, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಅಭ್ಯರ್ಥಿಯಾಗಿ ಬಿ.ಪಿ ಚಿಂತನ್, ಮಹಿಳಾ ಮೀಸಲು ಅಭ್ಯರ್ಥಿಯಾಗಿ ಮಮತ ಬಿ. ಕೆ ಹಾಗೂ ಟಿ. ಡಿ ಅನ್ನಪೂರ್ಣ, ಪರಿಷ್ಟಜಾತಿ ಮೀಸಲು ಅಭ್ಯರ್ಥಿಯಾಗಿ ಸುನೀಲ್ ಬಿ.ಸಿ ವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಬಗ್ಗೆ ಮೊದಲ ಆದೇಶ













